ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, July 15, 2009

ಯುವ ಚೇತನ

ಯುವಚೇತನ


ನಾಡಿನ ಬೆನ್ನೆಲುಬಾದ ಯುವಜನರಿಗೆ ಶಿಕ್ಷಣ,ಸ್ವಯಂಉದ್ಯೋಗ ತರಬೇತಿ ಹಾಗೂ ನೆರವು ನೀಡಿ ಸ್ವಾಭಿಮಾನಿಗಳಾಗಿ ಮಾಡಿ ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಅರಿವು, ಅಭಿಮಾನಗಳನ್ನು ಮೂಡಿಸಿ ನಾಡಿನ ಏಳ್ಗೆಗೆ ಯುವಜನರನ್ನು ಸಂಘಟಿಸುವ ಕಾರ್ಯನಿರಂತರ ಮಾಡಲಾಗುತ್ತಿದೆ.

1. ರಾಜಾಜಿನಗರ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿಗಳಿಗೆ 'ವ್ಯಕ್ತಿವಿಕಸನ ತರಬೇತಿ'ಯನ್ನು ನೀಡಲಾಯಿತು.






2. ಬಡ ಯುವಕ,ಯುವತಿಯರಿಗೆ ಮಾಧ್ಯಮ ತರಬೇತಿಯನ್ನು ನೀಡಲಾಯಿತು.










3. ನಗರದ ವಿವಿಧ ಕಡೆ ದಲಿತ,ಹಿಂದುಳಿದ,ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಉಚಿತ ಇಂಗ್ಲೀಷ್ ತರಗತಿಗಳನ್ನು ನೆಡೆಸಿಕೊಡಲಾಗುತ್ತಿದೆ.






4. ಯುವಜನರಿಗೆ ಪತ್ರಿಕೋದ್ಯಮ ತರಗತಿಗಳನ್ನು ನೆಡೆಸಲಾಯಿತು.





5. 2006-07ನೇ ಸಾಲಿನಲ್ಲಿ 10 ಬಡ ಯುವಕ-ಯುವತಿಯರಿಗೆ 'ಪ್ರಕೃತಿ ಎನ್.ಬನವಾಸಿ' ಇಂಗ್ಲೀಷ್ ಕಲಿಕಾಕೇಂದ್ರದಲ್ಲಿ ಒಂದು ತಿಂಗಳ ತರಬೇತಿ ಕೊಡಿಸಲಾಯಿತು.



6. ಗಿರೀಶ್.ಎಲ್ ಎಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶಧನ ನೀಡಲಾಯಿತು.







7. ಅಶೋಕಪುರಂ ಯೂತ್ ಅಸೋಸಿಯೇಷನ್ ಜೊತೆಗೂಡಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.









8. 'ಕಮ್ಯುನಿಕೇಶನ್ ಇಂಗ್ಲೀಷ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.








'ಬನ್ನಿ ಯುವಜನರೇ ದೇಶ ಕಟ್ಟುವ ಕೆಲಸ ಹೆಗಲ ಮೇಲಿದೆ.ಭ್ರಷ್ಟಾಚಾರ, ಅಸಮಾನತೆಯಿಂದ ಕುದಿಯುತ್ತಿರುವುದು ಸಾಕು. ನಮ್ಮ ನೆಲ,ಜಲ,ಸಂಸ್ಕೃತಿಯನ್ನು ರಕ್ಷಿಸೋಣ'

No comments:

Post a Comment