ನಮ್ಮ ಹೆಜ್ಜೆಗಳು
---
---
ಅರ್ಥಿಕವಾಗಿ ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಾವು ಧೈರ್ಯ ಬಿಡದೇ ಸಾಗುತ್ತಿದ್ದೇವೆ. ಬಡತನವೇ ಬಳುವಳಿಯಾಗಿ ಪಡೆದ ನಮ್ಮ ಸದಸ್ಯರು ಅದರಲ್ಲೂ ಹೆಣ್ಣುಮಕ್ಕಳು ನಾವು ಕೂತು ಚರ್ಚಿಸಲು ಸ್ಥಳವಿಲ್ಲದೇ ಪಾರ್ಕುಗಳಲ್ಲಿ ಕುಳಿತು ಚರ್ಚೆ ನಡೆಸುವ ಸಮಯದಲ್ಲೂ ಕುಗ್ಗದೇ ಈ ಸಮಾಜದಲ್ಲಿ ನಮ್ಮ ಸಣ್ಣ ಸಾಧನೆಗಳಿಗೆ ಕಾಣಿಕೆ ನೀದುತ್ತಿದ್ಧಾರೆ.
1. ರಾಜ್ಯದಲ್ಲೇ ಪ್ರಥಮವಾಗಿ 'ಮಾಹಿತಿ ಹಕ್ಕು ಜನಜಾಗೃತಿ ಕಾರ್ಯಕ್ರಮ' ನೆಡೆಸಿದ ಹೆಗ್ಗಳಿಕೆ ನಮ್ಮದು.
2. ಅಡೋಬ್ ನ ಸಹಯೋಗದೊಂದಿಗೆ ನಾವು ತಯಾರಿಸಿದ ಸಾಕ್ಷ್ಯಚಿತ್ರ ಬೀದಿಬದಿ ಹಲವು ಹೆಗ್ಗಳಿಕೆಗೆ ಪಾತ್ರವಾಗಿದೆ.
3. ನಮ್ಮ ಸಂಸ್ಥೆಗಳ ಸಾಧನೆಗೆ ಈ ಸಂಸ್ಥೆಯ ಸಂಸ್ಥಾಪಕರಿಗೆ ಅಂಬಾ ಪ್ರಕಾಶನ ಯಳಂದೂರು ಚಾಮರಾಜನಗರ ಇವರು 'ಸುವರ್ಣ ಸಿರಿ ಕನ್ನಡಿಗ' ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.4. ಪತ್ರಗಳ ಮೂಲಕದ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ಹಾಗೂ ಬಡಮಕ್ಕಳಿಗೆ ಆಟಿಕೆಗಳನ್ನು ಪೂರೈಸುತ್ತಿರುವ ಹನಿಚೇತನ ಕಾರ್ಯಕ್ರಮಗಳು ಹೆಚ್ಚು ವಿಶಿಷ್ಟ, ವಿನೂತನವಾಗಿ ಜನಪ್ರಿಯವಾಗಿವೆ.
5. ನಾವು ನೆಡೆಸುತ್ತಿರುವ ಎಲ್ಲಾ ತರಬೇತಿ ಶಿಬಿರಗಳು ಉಚಿತವಾಗಿ ಹಾಗೂ ನುರಿತ ತಜ್ಞರಿಂದ ನೆಡೆಸಲ್ಪಡುತ್ತಿವೆ.
6. ಪಿ.ಯು.ಸಿ.ಎಲ್ ಸೇರಿದಂತೆ ಹಲವಾರು ಸಂಘಾಟನೆ ಗಳೊಂದಿಗೆ ಸೇರಿ ಮಾಡಿರುವ 'ಕಟ್ಟಡ ಕಾರ್ಮಿಕರ ಹಿತರಕ್ಷಣಾ ಕ್ರಿಯಾ ಸಮಿತಿ'ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಂಸ್ಥೆಯ ಸಂಸ್ಥಾಪಕರೇ ಸಂಚಾಲಕರಾಗಿ ಕಟ್ಟಡ ಕಾರ್ಮಿಕರ ಅಪಘಾತಗಳ ಬಗ್ಗೆ ಸತ್ಯಶೋಧನೆ ಹಾಗೂ ಅವರ ಪರಿಹಾರ, ಹಕ್ಕುಗಳ ಬಗ್ಗೆ ಅಧ್ಯಯನ ಹಾಗೂ ಹೋರಾಟದಲ್ಲಿ ನಿರಂತರವಾಗಿ ದುಡಿಯುತ್ತಿದೆ.
nice one all the best
ReplyDeleteನಮಸ್ತೆ,
ReplyDeleteಕನ್ನಡ ಬ್ಲಾಗಿಗರ ಕೂಟದಲ್ಲಿ ನಿಮ್ಮ ಲಿಂಕ್ ನೋಡಿದೆ. ನಿಮ್ಮ ಪ್ರಯತ್ನ ಪ್ರಶಂಸನೀಯ.
ಗೆಳೆಯರ ಬಳಗಕ್ಕೆ ಅಭಿನಂದನೆಗಳು :)
ನನ್ನ ಬ್ಲಾಗುಗಳಿಗೊಮ್ಮೆ ಭೇಟಿ ನೀಡಿ :)
pls, nanagu heli.. ee reethiya sabgatanegalalli palgolluvudu nanagu ishta.. dayavittu thilisi.
ReplyDelete