ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, July 15, 2009

ಹನಿಚೇತನ



ಹನಿಚೇತನ






ಇಂದಿನ ಮಕ್ಕಳೇ ಮುಂದಿನ ಈ ಸಮಾಜ ಹಾಗೂ ಸಮಾಜದ ಬೆನ್ನೆಲುಬಾಗಿದ್ದು ನಾವು ಉತ್ತಮ ಸಮಾಜದ ಕನಸನ್ನು ಕಾಣುತ್ತೇವೆಂದರೆ ಮೊದಲು ಈಗಿನ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸಬೇಕಾಗಿದೆ.
ಈ ಕಾರ್ಯಕ್ರಮದಲ್ಲಿ....





'ವ್ಯಕ್ತಿತ್ವ ವಿಕಸನ ಹಾಗೂ ತರಬೇತಿ ಶಿಬಿರ'


  • ಬಡ ವಿದ್ಯಾರ್ಥಿಗಳು , ಸ್ಲಂ ಮಕ್ಕಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 'ವ್ಯಕ್ತಿತ್ವ ವಿಕಸನ' ಕಾರ್ಯಕ್ರಮ, 'ಡ್ರಾಯಿಂಗ್' 'ಉಚಿತ ಇಂಗ್ಲೀಷ್ ತರಗತಿ'ಗಳನ್ನು ನೆಡೆಸಲಾಗುತ್ತಿದೆ. ಈ ಮೂಲಕ ಅವರ ಪ್ರತಿಭೆಯನ್ನು ಹೊರತರುವ ಪ್ರಯತ್ನ ಹಾಗೂ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ.


  • ಕೆ.ಟಿ.ಎಸ್.ವಿ ಪ್ರೌಢಶಾಲೆ ರಾಜಾಜಿನಗರ ಬೆಂಗಳೂರು ಇಲ್ಲಿನ ಎಸ್.ಎಸ್,ಎಲ್.ಸಿ ವಿಧ್ಯಾರ್ಥಿಗಳಿಗೆ 'ಪರೀಕ್ಷಾ ಸಿದ್ದತೆ' ಬಗ್ಗೆ 2008 ಮಾರ್ಚ್ ನಲ್ಲಿ ತರಬೇತಿ ನೀಡಲಾಯಿತು.



  • ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ವ್ಯಕ್ತಿವಿಕಸನ ಶಿಬಿರಗಳನ್ನು ನೆಡೆಸಿಕೊಡಲಾಯಿತು.

  • ಚಿತ್ರಕಲಾ ಪರಿಷತ್ತ್ ನ ಭಾರ್ಗವಿಯವರಿಂದ 'ಚಿತ್ರಕಲೆ ತರಬೇತಿ'ಯನ್ನು ನೀಡಲಾಯಿತು. ಸ್ಲಂಗಳಲ್ಲಿನ ಮಕ್ಕಳಿಗೆ ಮನೆಪಾಠಗಳನ್ನು ನೆಡೆಸಲಾಯಿತು.


  • 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ಸರ್ಕಾರಿ ಶಾಲೆ ಮಕ್ಕಳಿಗೆ 'ಉಚಿತ ಇಂಗ್ಲೀಷ್ ತರಬೇತಿ'ಯನ್ನು ನೆಡೆಸಲಾಯಿತು.



ನೆರವು :




ಮೂಲಭೂತ ಸೌಕರ್ಯಗಳನ್ನು, ಲೇಖನ ಸಾಮಗ್ರಿಗಳನ್ನು ಒದಗಿಸುತ್ತಾ ಉತ್ತೇಜಿಸುವ ಹಾಗೂ ಅವರ ಉತ್ತಮ ಕನಸುಗಳ ಭವಿಷ್ಯಕ್ಕೆ ಪೋಷಣೆ ನೀಡಲಾಗುತ್ತಿದೆ. ಪ್ರತಿವರ್ಷ ಹಲವಾರು ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅರ್ಥಿಕ ನೆರವು ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

No comments:

Post a Comment