ಇದು ರಾಷ್ಟ್ರೀಯ ಹೆದ್ದಾರಿ ೪ರಲ್ಲಿರುವ , ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದ ಮುಂಭಾಗದಲ್ಲಿರುವ ಸಣ್ಣ ಕೊಳಗೇರಿ. ಇದು ಜನಾಸ್ತ್ರ ಸಂಘಟನೆಯ ಜನ್ಮಭೂಮಿ. ಸಂಘಟನೆಯ ಹೆಚ್ಚಿನ ಸದಸ್ಯರು ವಾಸಸ್ಥಳ. ಇಲ್ಲಿ ಜನಾಸ್ತ್ರ ಸಂಘಟನೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಇಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಆಡಳಿತ ಜನರ ನಿರ್ಲಕ್ಷ್ಯದಿಂದ ಅದರೊಳಗೆ ಸಾರಾಯಿ ಪಾಕೇಟ್ ಕಡ್ಡಿ ಕಸ ಇತ್ಯಾಧಿ ಬಿದ್ದು ನಾರುತ್ತಾ ರೋಗದ ಮನೆಯಾಗಿತ್ತು. ನೀರಿನ ನಲ್ಲಿಗಳು ಮುರಿದು ಹೋಗಿದ್ದವು. ಹೊರಚೆಲ್ಲುವ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಗೆ ಹರಿದು ರಸ್ತೆ ಪೂರ ಕೊಚ್ಚೆಯಾಗಿತ್ತು. ಟ್ಯಾಂಕ್ನ ಸುತ್ತ ಮುತ್ತ ನೀರು ನಿಂತು ಸೊಳ್ಳೆ ಹಾವಳಿಯಿತ್ತು. ಇದನ್ನು ಮನಗಂಡ ಸಂಘಟನೆಯ ಸದಸ್ಯರು ಪ್ರತಿ ಮನೆಯಿಂದ 1 ರೂ ಸಂಗ್ರಹಿಸಿ ಕುಡಿಯುವ ನೀರಿನ ಟ್ಯಾಂಕನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತದೆ.
ಸಾಲುಮರ: ಹಲವಾರು ಗೆಳೆಯರ ಸಹಕಾರದೊಂದಿಗೆ ಸಾಲು ಸಾಲು ಮರಗಳನ್ನು ನೆಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ರಸ್ತೆ ದುರಸ್ತಿಯ ಸಂದರ್ಭದಲ್ಲಿ ಗಿಡಗಳು ನಾಶವಾದವು. ಮತ್ತೆ ಹೊಸ ಸಸಿಗಳನ್ನು ನೆಡಲಾಗಿದ್ದು, ಅವುಗಳಿಗೆ ಸರಿಯಾದ ಪೋಷಣೆಯನ್ನು ನೀಡಲು ಕಾರ್ಯಪ್ರವೃತ್ತರಾಗಿದ್ದೇವೆ.
ರಸ್ತೆ ಸ್ವಚ್ಚತೆ : ರಸ್ತೆಯ ಬದಿಯಲ್ಲಿ ಬೆಳೆದ ಗಿಡ ಗಂಟೆಗಳನ್ನು ಕಿತ್ತು ಮುಳ್ಳು ಗಿಡಗಳನ್ನು ಸುಟ್ಟು ನೈರ್ಮಲ್ಯ ಕಾಪಾಡಲು ಮಕ್ಕಳು ಯುವಕರು ದುಡಿಯುತ್ತಿದ್ದಾರೆ.
No comments:
Post a Comment